ಬವಣೆ ಗೂಡು

ಚೈತ್ರ ಬಂದರೇನು?
ಚಿಗುರಿಲ್ಲವಲ್ಲ
ವಸಂತ ಬಂದರೇನು
ಹೂ ಅರಳಿಲ್ಲವಲ್ಲ.
ಯುಗಾದಿ ಬಂದರೇನು?
ಹರುಷವಿಲ್ಲವಲ್ಲ
ಕಟ್ಟಿದ ಕನಸುಗಳು
ನನಸಾಗದೆ ಬಂಧಿಯಾಗಿವೆ
ಭೂತದ ಪಂಜರದಲ್ಲಿ
ಆಸೆ ಭರವಸೆಗಳು ದಹಿಸಿವೆ
ಅಂತರಂಗದ ಅಗ್ನಿಕುಂಡದಲ್ಲಿ
ಹೃದಯ ಮನಸ್ಸುಗಳೆರಡು
ಶಿಲೆಯಾಗಿವೆ.
ಜಡಭರತ | ಸಮಾಧಿಯೊಳಗೆ
ಮುಂದೇನು? ಮುಂದೇನು?
ಭಯಾಂತಂಕದ ಬಿಳಿಲುಗಳು
ನೇತಾಡುತ್ತಿವೆ ಶವದಂತೆ
ಕಾಲವೃಕ್ಷದಲ್ಲಿ.
ಹುಟ್ಟು ಸಾವು, ನೋವು ನಲಿವು
ಬೆಲ್ಲ ಬೇವು
ತಾಕಲಾಟದ ತಕ್ಕಡಿಯಲ್ಲಿ.
ಯುಗಾದಿ ಬಂದರೇನು?
ಬಾರದಿದ್ದರೇನು?
ಬದಲಾಗದು ಸ್ವರತಾನ
ಅದೇ ರಾಗ ಅದೇ ಹಾಡು
ಬದುಕು ಬರಡು
ಬವಣೆ ಗೂಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಕೊಡುವ ಆಸೆಯೂ ಇಲ್ಲ
Next post ನಗುವ ಗಗನವೆ ಮುಗಿಲ ಮೇಘವೆ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys